Saturday, December 20, 2008

ಕಳೆದುಕೊಂಡೆನೇ ನಿನ್ನ?

ಕೊರಗಿರುವೆ ಅನುದಿನ ನಾನು ನಿನ್ನೊಲವ ಸವಿನೆನಪಲ್ಲಿ
ಬೆಂದಿರುವ ಬಯಕೆಗಳು ಚಿಗುರುತಿವೆ ಎದೆನೆಲದಲ್ಲಿ
ಹೂತಿಟ್ಟ ಕನಸುಗಳು ಕರೆಯುತಿವೆ ಕೈ ಬೀಸಿ
ಕೊಂಡೊಯ್ಯುದೆಲ್ಲಿಗೋ ಬಾಳ ಹಾದಿಯ ತೊರೆಸಿ

ಕ್ಷಮಿಸಿಬಿಡು ನನ್ನನು ನಿನ್ನೊಲವ ಅರಿಯದಾದೆ
ಸಿಕ್ಕಿಯೂ ದಕ್ಕದಿದು ವಿಧಿಬರಹ ಹಾಗಿದೆ
ಬದುಕೆಲ್ಲೋ ಒಲವಿನ್ನೆಲ್ಲೋ ಪರದಾಟ ನನ್ನದು
ಯಾರಲ್ಲಿ ಹೇಳಲಿ ಈ ನೋವು ಮುಗಿಯುವುದೆಂದು?

ಅಸ್ಪಷ್ಟ ಕಲ್ಪನೆಗೆ ನಿಜ ರೂಪ ನೀ ತಂದೆ
ಅರೆಬರೆಯ ಭಾವಗಳ ನೀ ಪೂರ್ಣಗೊಳಿಸಿದೆ
ಪ್ರೇಮದ ಮೊಳಕೆಯದು ಮರವಾಗಿ ನಿಂತಿದೆ
ಕಡಿಯದಿರು ನೀನೆಂದೂ ಆ ನೆರಳುಬೇಕಿದೆ

ಅರಿವಿಗೆ ಬರದಂತೆ ಬಲಿತುಹೋಗಿದೆ ಪ್ರೀತಿ
ತಿಳಿಯದಾಗಿದೆ ಅದನು ಕಾಯ್ದುಕೊಳ್ಳುವ ರೀತಿ
ಚಿಪ್ಪೊಳಡಗಿದ ಒಲವ ಹುಡುಕಿ ನೀ ತೆಗೆದಿರುವೆ
ಎಂದಿಗೂ ಸಲ್ಲದಿದು ಉಳಿಯುವುದು ಬರಿ ನೋವೇ!

ನಿನ್ನ ಯೋಚನೆಯಲ್ಲೆ ಆರಂಭ ನನ್ನ ದಿನ
ನಿನ್ನ ಮಾತಿನ ವಿನಃ ಜಗವೆಲ್ಲ ಬರಿ ಮೌನ
ಪುತ್ಥಳಿಯ ಪ್ರೇಮವನು ನನ್ನೆದೆಗೆ ನೀ ತಂದೆ
ಪ್ರತಿಯಾಗಿ ಕೊಡಲೇನು ನಾ ತಿಳಿಯದಾಗಿಹೆ

ಮರುಗದಿರು ನೀನೆಂದು ಮುಂದಿದೆ ಒಳ್ಳೆದಿನ
ಕಳೆದೆಲ್ಲ ನೋವುಗಳು ಸಿಗಲಿ ಸುಖ ಸೋಪಾನ
ದುಃಖಪಡುತಿರಲೆಂದೆ ನಾನಿರುವೆ ಭುವಿಯಲ್ಲಿ
ಜಗದೆಲ್ಲ ಸುಖಗಳು ನಿನ್ನ ಹುಡುಕುತ ಬರಲಿ

1 comment:

Unknown said...

MY DEAR BHARATHI,I M UR HUSBAND.I READ UR "KAVANA".ITS REALLY VERY VERY NICE AND UR WAY OF WRITING IS REALLY VERY GOOD.KEEP WRIRING THESE WOUNDERFUL POEMS AND ACHIVE SOMETHING IN THIS FIELD.KEEP WRIRTING SOME POEMS ON SOCIAL THINGS ALSO.

UR LOVING HUSBAND
VENKATESH UPADHYAYA

WRITTEN BY HIS COLLIGEU
SHARATH(HOPLESFELLOW)